ಆಗಸ್ಟ್ 12ರಂದು ``ತೊಳಲಾಟ`` ಬಿಡುಗಡೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಆಗಸ್ಟ್ 8 , 2015
|
ಆಗಸ್ಟ್ 8, 2015
|
ಆಗಸ್ಟ್ 12ರಂದು ``ತೊಳಲಾಟ`` ಬಿಡುಗಡೆ
ಮಂಗಳೂರು :
ಯಕ್ಷಗಾನ ಕಲಾವಿದರೊಬ್ಬರ ಜೀವನ ಚರಿತ್ರೆ ಬರೆಯಲು ಮುಂದಾಗುವ ಶಿಕ್ಷಕನ ಮನದ ತೊಳಲಾಟ 16ನಿಮಿಷಗಳ ಅವಧಿಯ ಕಿರುಚಿತ್ರದ ಮೂಲಕ ಹೊರಹೊಮ್ಮುತ್ತಿದೆ. ಅದುವೇ “ತೊಳಲಾಟ”. ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
|
ಸೂರಿಕುಮೇರು ಗೋವಿಂದ ಭಟ್
|
ಪತ್ರಕರ್ತ ವಿಜಿ ಕಾಸರಗೋಡು, ವೆಂಕಟ್ರಮಣ ಹೊಳ್ಳ, ಜಿ.ಕೆ.ಅಡಿಗ, ಉದಯ ಕಲ್ಲೂರಾಯ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಯಕ್ಷಗಾನ ಕ್ಷೇತ್ರದ ಯುವ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಸಂಗೀತ ನೀಡಿದ್ದಾರೆ. ಕಾಸರಗೋಡಿನ ಯುವಕ ಮಹೇಶಕೃಷ್ಣ ತೇಜಸ್ವಿ ಛಾಯಾಗ್ರಹಣ ಮತ್ತು ಸಂಕಲ ನಿರ್ವಹಿಸಿದ್ದಾರೆ. ದೀಪ್ತಿ ಚಿತ್ರ ನಿರ್ಮಿಸಿದ್ದಾರೆ. ಪತ್ರಕರ್ತ, ಉತ್ಸಾಹೀ ಯುವಕ ಶೇಣಿ ಮುರಳೀ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ.
ಇದೇ ತಿಂಗಳ 12ರಂದು ಮಂಗಳೂರಿನ ಶಾರದಾ ವಿದ್ಯಾಲಯದ ಧ್ಯಾನಮಂದಿರದಲ್ಲಿ ಕಿರುಚಿತ್ರ ಬಿಡುಗಡೆಗೊಳ್ಳಲಿದೆ. ಬಿಡಿಎ ಆಯುಕ್ತ ಟಿ.ಶ್ಯಾಮ್ ಭಟ್ ಬಿಡುಗಡೆಗೊಳಿಸುವರು. ಪ್ರದೀಪ್ ಕುಮಾರ್ ಕಲ್ಕೂರ, ಡಾ.ಎಂ.ಪ್ರಭಾಕರ ಜೋಷಿ, ಡಾ.ಬಿ.ಜನಾರ್ದನ ಭಟ್ ಕಾರ್ಯಕ್ರಮದಲ್ಲಿರುವರು.
ಸಾಕಷ್ಟು ಕನಸುಗಳನ್ನು ಹೊತ್ತ ಯುವ ಮನಸ್ಸುಗಳು ಚಿತ್ರ ನಿರ್ಮಾಣದ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇನ್ನಷ್ಟು ಉತ್ತಮ ಚಿತ್ರಗಳು ಅವರಿಂದ ಹೊರಬರಲೆಂಬುದು ವಾರ್ತೆ.ಕಾಂನ ಆಶಯ.
ಕೃಪೆ :
vaarte.com
|
|
|